"ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು".
"ಮಾತೇ ಮುತ್ತು , ಮಾತೇ ಮೃತ್ಯು"
"ಮಾತು ಬಂಗಾರ, ಮೌನ ಬೆಳ್ಳಿ "
ಜೀವಜಗತ್ತಿನ ಮಾತನಾಡುವ ಏಕೈಕ ಜೀವಿ ಮನುಷ್ಯ
ಮಾನವರಾದ ನಮಗಿರುವ ವಿಶೇಷತೆಯೇ ಮಾತು. ನಮ್ಮ ಮನಸನ್ನು, ಭಾವನೆಯನ್ನು ಬೇರೆಯವರ ಮುಂದಿಡುವ ಸುಲಭ ಸಾಧನ ಈ ಮಾತು. ಅದನ್ನು ಯಾವ ರೀತಿ ಉಪಯೋಗಿಸುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ.
ಒಳ್ಳೆಯವರ ಮಾತು ಮುತ್ತು
- ಒಳ್ಳೆಯವರ ಮಾತು ಯಾವಾಗಲೂ ಉತ್ತಮವಾಗಿರುತ್ತದೆ.
- ಅವರು ಕಡಿಮೆ ಮಾತನಾಡುತ್ತಾರೆ. ಅದಕ್ಕೆ ಹೆಚ್ಚು ಅರ್ಥವಿರುತ್ತದೆ.
- ಅವರು ಯಾರನ್ನು ನೋಯಿಸುವುದಿಲ್ಲ.
- ಸರಿಯಾಗಿ ಯೋಚಿಸಿ, ಚಿಂತಿಸಿ ನಿಧಾನವಾಗಿ ಮಾತನಾಡುತ್ತಾರೆ.
- ಇನ್ನೊಬ್ಬರ ಬಗ್ಗೆ ಚಾಡಿ ಹೇಳುವುದು, ಹಿಂದಿನಿಂದ ಮಾತನಾಡುವುದು ಅವರಿಗೆ ಇಷ್ಟವಾಗುವುದಿಲ್ಲ.
ಕೆಟ್ಟವರ ಮಾತುಗಳು
- ಕೆಟ್ಟವರು ಮಾತು ಶುರು ಮಾಡಿದರೆ ಅದನ್ನು ಕೇಳಲಾಗುವುದಿಲ್ಲ. ಕಿವಿ ಮುಚ್ಚುವ ಎಂದೆನಿಸುತ್ತದೆ.
- ಇವರು ಯಾವಾಗ ಬಾಯಿ ಮುಚ್ಚುತಾರೆ ಎಂದು ಕಾಯುವಂತೆ ಆಗುತ್ತದೆ.
- ಅವರ ಬಾಯಲ್ಲಿ ಒಳ್ಳೆಯ ಮಾತು ಬರುವುದಿಲ್ಲ.
- ಒಂದೋ ಚಾಡಿ ಹೇಳುತ್ತಾರೆ, ಇಲ್ಲ ಯಾರಿಗೋ ಬಯ್ಯುತ್ತಿರುತ್ತಾರೆ ,
- ಇಲ್ಲ ಬೇಡದ ವಿಚಾರ, ಅವರಿವರ ಮನೇ ಸುದ್ದಿ ಮಾತನಾಡಿ ಮನೆ ಹಾಳು ಮಾಡುತ್ತಿರುತ್ತಾರೆ.
- ಅವರಿಗೆ ಬುದ್ಧಿಯಿಲ್ಲ. ನಮಗೆ ನೆಮ್ಮದಿ ಇಲ್ಲ.
- ದಿನಾ ಅದೇ ಮಾತು ಕೇಳುತ್ತಿದ್ದರೆ ನಾವು ಅವರಂತೆ ಆಗುತ್ತೇವೆ.
ಅದಕ್ಕೆ ನಾವು ಯಾವಾಗಲೂ ಉತ್ತಮರ ಸಂಗ ಮಾಡಬೇಕು. ಎಲ್ಲರಿಗೂ ಇಷ್ಟವಾಗುವ ಒಳ್ಳೆಯ ಮಾತನ್ನಾಡಿ ನಾವು ನೆಮ್ಮದಿಯಾರೋಣ. ಇತರರನ್ನೂ ನೆಮ್ಮದಿಯಾಗಿ ಬದುಕಲು ಬಿಡೋಣ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ