ಭಾನುವಾರ, ಡಿಸೆಂಬರ್ 1, 2024

ಮಾತು ಮುತ್ತು

 "ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು".

"ಮಾತೇ ಮುತ್ತು , ಮಾತೇ ಮೃತ್ಯು"
"ಮಾತು ಬಂಗಾರ, ಮೌನ ಬೆಳ್ಳಿ "

ಜೀವಜಗತ್ತಿನ ಮಾತನಾಡುವ ಏಕೈಕ ಜೀವಿ ಮನುಷ್ಯ
ಮಾನವರಾದ ನಮಗಿರುವ ವಿಶೇಷತೆಯೇ ಮಾತು. ನಮ್ಮ ಮನಸನ್ನು, ಭಾವನೆಯನ್ನು ಬೇರೆಯವರ ಮುಂದಿಡುವ ಸುಲಭ ಸಾಧನ ಈ ಮಾತು. ಅದನ್ನು ಯಾವ ರೀತಿ ಉಪಯೋಗಿಸುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ.

ಒಳ್ಳೆಯವರ ಮಾತು ಮುತ್ತು 

  • ಒಳ್ಳೆಯವರ ಮಾತು ಯಾವಾಗಲೂ ಉತ್ತಮವಾಗಿರುತ್ತದೆ. 
  • ಅವರು ಕಡಿಮೆ ಮಾತನಾಡುತ್ತಾರೆ. ಅದಕ್ಕೆ ಹೆಚ್ಚು ಅರ್ಥವಿರುತ್ತದೆ.
  • ಅವರು ಯಾರನ್ನು ನೋಯಿಸುವುದಿಲ್ಲ. 
  • ಸರಿಯಾಗಿ ಯೋಚಿಸಿ, ಚಿಂತಿಸಿ ನಿಧಾನವಾಗಿ ಮಾತನಾಡುತ್ತಾರೆ.
  • ಇನ್ನೊಬ್ಬರ ಬಗ್ಗೆ ಚಾಡಿ ಹೇಳುವುದು, ಹಿಂದಿನಿಂದ ಮಾತನಾಡುವುದು ಅವರಿಗೆ ಇಷ್ಟವಾಗುವುದಿಲ್ಲ.
ಕೆಟ್ಟವರ ಮಾತುಗಳು 

  •  ಕೆಟ್ಟವರು ಮಾತು ಶುರು ಮಾಡಿದರೆ ಅದನ್ನು ಕೇಳಲಾಗುವುದಿಲ್ಲ. ಕಿವಿ ಮುಚ್ಚುವ ಎಂದೆನಿಸುತ್ತದೆ.
  • ಇವರು ಯಾವಾಗ ಬಾಯಿ ಮುಚ್ಚುತಾರೆ  ಎಂದು ಕಾಯುವಂತೆ ಆಗುತ್ತದೆ. 
  • ಅವರ ಬಾಯಲ್ಲಿ ಒಳ್ಳೆಯ ಮಾತು ಬರುವುದಿಲ್ಲ. 
  • ಒಂದೋ ಚಾಡಿ ಹೇಳುತ್ತಾರೆ, ಇಲ್ಲ ಯಾರಿಗೋ ಬಯ್ಯುತ್ತಿರುತ್ತಾರೆ , 
  • ಇಲ್ಲ ಬೇಡದ ವಿಚಾರ, ಅವರಿವರ ಮನೇ ಸುದ್ದಿ  ಮಾತನಾಡಿ ಮನೆ ಹಾಳು ಮಾಡುತ್ತಿರುತ್ತಾರೆ. 
  • ಅವರಿಗೆ ಬುದ್ಧಿಯಿಲ್ಲ. ನಮಗೆ ನೆಮ್ಮದಿ ಇಲ್ಲ.
  • ದಿನಾ ಅದೇ ಮಾತು ಕೇಳುತ್ತಿದ್ದರೆ ನಾವು ಅವರಂತೆ ಆಗುತ್ತೇವೆ. 

ಅದಕ್ಕೆ ನಾವು ಯಾವಾಗಲೂ ಉತ್ತಮರ ಸಂಗ ಮಾಡಬೇಕು. ಎಲ್ಲರಿಗೂ ಇಷ್ಟವಾಗುವ ಒಳ್ಳೆಯ ಮಾತನ್ನಾಡಿ ನಾವು ನೆಮ್ಮದಿಯಾರೋಣ. ಇತರರನ್ನೂ ನೆಮ್ಮದಿಯಾಗಿ ಬದುಕಲು ಬಿಡೋಣ.








ಮಿಕ್ಕಿ

ಮಿಕ್ಕಿ ಬಿಲ್ಲಿಯ ಮಗ.  ಅವಳು ಎರಡು ಮಕ್ಕಳಲ್ಲಿ ಒಬ್ಬ. ಬೆಕ್ಕುಗಳ ಬಗ್ಗೆ ಹೆಚ್ಚಿನೂ ಗೊತ್ತಿಲ್ಲದ,ಇಷ್ಟವೂ ಇಲ್ಲದ ನಾನು ಅವನ ಬಗ್ಗೆ ಗಮನಹರಿಸಿರಲಿಲ್ಲ. ಕನಿಷ್ಠ ಪಕ್ಷ ಬಿಲ್ಲಿಯ ಮಕ್ಕಳ ಮುಖ ನೋಡಲೂ ಹೋಗಲಿಲ್ಲ. ಹಳೆಯ ಬಾರಿ ನನಗಾದ ಅನುಭವ ಮರಿಗಳ ಮುಖ ನೋಡಲೂ ಇಷ್ಟವಿಲ್ಲದಂತೆ ಮಾಡಿತ್ತು.

ಕಳೆದ ಬಾರಿ ಬಿಲ್ಲಿ ಮರಿ ಇಟ್ಟಾಗ ಬೆಂಚಿನ ಮೇಲೆ ಮರಿಗಳನ್ನು ಇಟ್ಟು ಕುಳಿತಿದ್ದಳು . ಒಂದು ಮರಿ ತಪ್ಪಿ ಕೆಳಗೆ ಬಿದ್ದು ಒದ್ಧಾಡುತಿತ್ತು. ಅದರ ಕೂಗು ಕೇಳಿ ಬಂದ ನಾನು, ಅಯ್ಯೋ ಪಾಪ ಎಂದು ಮರಿಯನ್ನು ಎತ್ತಿ ಬೆಂಚಿನ ಮೇಲೆ ಇಟ್ಟೆ. ಬಿಲ್ಲಿ ಮರಿಯನ್ನು ಮೂಸಿ ನೋಡಿ, ತನ್ನ ಇನ್ನೊಂದು ಮರಿಯ ಜತೆ ಬೇರೆ ಕಡೆ ಹೊರಟು ಹೋದಳು. ಈ ಮರಿ ಜೋರಾಗಿ ಕೂಗುತ್ತಿತ್ತು. ನಾನು ಪುನಃ ಮರಿಯನ್ನು ಎತ್ತಿ ಕೊಂಡು ಹೋಗಿ ಅವಳ ಬಳಿ ಬಿಟ್ಟೆ. ಅವಳು ಮತ್ತೆ ಜಾಗ ಬದಲಾಯಿಸಿದಳು. ನನಗೆ ತಲೆ ಬಿಸಿಯಾಯಿತು. ಬಿದ್ದು ಏಟಾಗಿದ್ದಕ್ಕೋ, ನಾನು ಮುಟ್ಟಿದ್ದಕ್ಕೋ ಬಿಲ್ಲಿ ಮರಿಯನ್ನು ಮೂಸಲೂ ಇಲ್ಲ. ಹಾಲು ಕುಡಿಸಲೂ ಇಲ್ಲ. ಆ ಮರಿ ಸತ್ತೇ ಹೋಯಿತು. ಅದು ನನ್ನನ್ನು ಬಹಳ ಕಾಡಿತು.


ಈ ಸಲ ಏನಾದರಾಗಲಿ ಎಂದು ಆ ಮರಿಗಳ ಮುಖ ನೋಡಲೂ ಹೋಗಲಿಲ್ಲ.ಮರಿಗಳು ಸ್ವಲ್ಪ ದೊಡ್ಡದಾಗಿ, ಮನೆ ತುಂಬಾ ಓಡಾಡಲು ಶುರು ಮಾಡಿದವು. ಊಟಕ್ಕೆ ಕುಳಿತಾಗ ಹತ್ತಿರ ಬಂದು ಕುಳಿತು ಮೀಯಾಂ ಎನ್ನುತಿದ್ದವು.ನಾನು ಕಿವಿ ಕೇಳಿದಂತೆ ನಟಿಸುತಿದ್ದೆ. ನೋಡಿಯೂ ನೋಡದಂತೆ ಇರುತ್ತಿದ್ದೆ. ಒಮ್ಮೆ ಊಟ ಮಾಡುತ್ತಿದ್ದಾಗ ನನ್ನ ಹತ್ತಿರ ಕೂತಿದ್ದ ಮಿಕ್ಕಿ ಎದ್ದು ನಿಂತು ನನ್ನ ಕಾಲಿಗೆ ತನ್ನ ಮುಖವನ್ನು ಉಜ್ಜತೊಡಗಿದ. ನಾನು ಅದನ್ನು ದೂರ ಕಳಿಸಿದೆ. ಮತ್ತೆ ಹತ್ತಿರ ಬಂದು ಕುಳಿತು ಮೀಯಾಂ ಎನ್ನುತ್ತ ಮಡಿಲು ಏರಿ ಕುಳಿತಿತು. ಎಷ್ಟೇ ಜೋರು ಮಾಡಿದರೂ ಕೆಳಗೆ ಇಳಿಯಲಿಲ್ಲ. ಆ ನಂತರ ಪ್ರತಿ ದಿನ ಹಾಗೆ ಮಾಡುತಿತ್ತು. ಕೆಳಗೆ ಕುಳಿತರೆ ಸಾಕು, ಓಡಿ ಬಂದು ಮಡಿಲಿನಲ್ಲಿ ಕುಳಿತುಕೊಳ್ಳುತಿತ್ತು. ನನಗೇ ಗೊತ್ತಿಲ್ಲದಂತೆ ಮಿಕ್ಕಿ ನನ್ನ ಮನಸಿಗೆ ಹತ್ತಿರವಾದ. ಅವನಿಗೆ ನನ್ನನ್ನು ಕಂಡರೆ ಇಷ್ಟ, ನನಗೂ ಅ‌ಷ್ಟೇ.

ಅಷ್ಟರಲ್ಲೇ ಮದುವೆ ನಿಶ್ಚಯವಾಯಿತು. ಅವನ ಮತ್ತು ನನ್ನ ಒಡನಾಟ ಹಾಗೆ ಮುಂದುವರೆಯಿತು. ಮದುವೆ ತಯಾರಿಯಲ್ಲಿ ದಿನಗಳುರುಳಿ , ಎಲ್ಲ ಗದ್ದಲ ಮುಗಿಸಿ ಗಂಡನ ಮನೆಗೆ ಹೋದ ಮೇಲೆ, ಅಲ್ಲಿನ ಹೊಸ ವಾತಾವರಣದಲ್ಲಿ ನಾನು ಮಿಕ್ಕಿಯನ್ನು ಮರೆತೇ ಬಿಟ್ಟೆ. ಸ್ವಲ್ಪ ದಿನಗಳ ನಂತರ ಮತ್ತೆ ಮನೆಗೆ ಹೋದಾಗಲೂ ಮಿಕ್ಕಿ ಓಡಿ ಬಂದ. ಮಾಮೂಲಿಗಿಂತ ಹೆಚ್ಚು ನನಗೆ ಅಂಟಿಕೊಂಡ.ಎರಡು ದಿನಗಳ ನಂತರ ತಿರುಗಿ ಹೊರಟಾಗ ಹೊರ ಜಗುಲಿಯಲ್ಲಿ ಕುಳಿತು ನನ್ನನ್ನೇ ನೋಡುತ್ತಿದ್ದ.  ಬೇಸರವಾಯಿತು...

ಮುಂದಿನ ಬಾರಿ ಹೋದಾಗ ಮಿಕ್ಕಿ ಎಲ್ಲೂ ಕಾಣಲಿಲ್ಲ. ಅಮ್ಮನನ್ನು ಕೇಳಿದಾಗ, ನೀನು ಕಳೆದ ಸಾರಿ ಬಂದು ಹೋದ ಮೇಲೆ, ಅವನು ಎಲ್ಲೂ ಕಾಣ್ತಾ ಇಲ್ಲ ಎಂದು ಹೇಳಿದಾಗ ನನ್ನ ಹೃದಯ ಭಾರವಾಯಿತು. ಅವನ ನೆನಪಾದಾಗ ಕಣ್ಣು ತುಂಬಿ ಬರುತ್ತದೆ. ಮಿಸ್ ಯು ಮಿಕ್ಕಿ...!

ಎಲ್ಲಿದೆ ನೆಮ್ಮದಿ?


ಬದುಕಿಗೆ ನೆಮ್ಮದಿ ಬಹಳ ಮುಖ್ಯ. ಅದನ್ನು ಖರೀದಿಸಲು ಸಾದ್ಯವಿಲ್ಲ. ಹಾಗಾದರೇ ಅದು ಎಲ್ಲಿದೆ?
ಎಷ್ಟು ಹಣವಿದ್ದರೇನು? ತಿನ್ನಲಾಗುವುದಿಲ್ಲ, ಅಲ್ಲವೇ? ಹೊಟ್ಟೆ ಹಸಿದಾಗ ಊಟ ಬೇಕು, ಬಾಯಾರಿದಾಗ ನೀರು ಬೇಕು, ಉಸಿರಾಡಲು ಶುದ್ಧ ಗಾಳಿ ಬೇಕು, ಇವೆಲ್ಲ ಮಾಡಲು ಆರೋಗ್ಯ ಬೇಕು. ಉತ್ತಮ ಆರೋಗ್ಯಕ್ಕಾಗಿ ಏನು ಬೇಕು?

ಮನಸಿಗೆ ನೆಮ್ಮದಿ ಬೇಕು. ಅದು ನೆಮ್ಮದಿಯಾಗಿ ಇದ್ದರೆ ಆರೋಗ್ಯ ಚೆನ್ನಾಗಿ ಇರುತ್ತದೆ. 

ಮನಸನ್ನು ಚೆನ್ನಾಗಿ ಇಟ್ಟುಕೊಳ್ಳಲು 

1.ಕೋಪ ಕಡಿಮೆ ಮಾಡಬೇಕು. ಅದಕ್ಕಾಗಿ
*ದೀರ್ಘವಾಗಿ ಉಸಿರಾಡಿ.
*ಒಂದರಿಂದ ನೂರರವರೆಗೆ ನಿಧಾನವಾಗಿ ಎಣಿಸಿ.
*ಮೌನವಾಗಿ ಕುಳಿತುಕೊಳ್ಳಿ.
*ಕೋಪಕ್ಕೆ ಕಾರಣವೇನೆಂದು ಯೋಚಿಸಿ.
*ಕಾರಣ ಚಿಕ್ಕದೆಂದು ಅರ್ಥವಾದಾಗ ಮನಸು ತಿಳಿಯಾಗುವುದು.
2.ಅತಿಯಾಸೆಯನ್ನು ಬಿಟ್ಟು ಇರುವುದರಲ್ಲಿ ಖುಷಿಯಾಗಿ ಇರಬೇಕು
3.ಇನ್ನೊಬ್ಬರನ್ನು ನೋಡಿ ಹೊಟ್ಟೆಕಿಚ್ಚು ಪಡುವ ಬದಲು ನಾವು ಅವರಿಗೆ ಒಳಿತನ್ನು ಬಯಸಬೇಕು.
4.ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು.
5.ಕಷ್ಟಪಟ್ಟು ದುಡಿಯುವ ಮನಸಿರಬೇಕು.
6.ದೇವರ ಮೇಲೆ ದೃಢವಾದ ನಂಬಿಕೆ, ಭಕ್ತಿ ಇರಬೇಕು.
7.ಸಕಾರಾತ್ಮಕ ಚಿಂತನೆಗಳನ್ನು ಮಾಡಬೇಕು.
8.ಎಲ್ಲರಿಗೂ ಒಳಿತನ್ನು ಬಯಸುವ ಒಳ್ಳೆಯ ಮನಸಿರಬೇಕು.
9.ಬೇರೆಯವರನ್ನು ತನ್ನಂತೆ ಭಾವಿಸಬೇಕು .
10.ತನ್ನವರನ್ನು ಮಾತ್ರವಲ್ಲ ಇತರನ್ನು ಗೌರವಿಸಬೇಕು.
11.ಯಾರಿಗೂ ಕೇಡು ಮಾಡಬೇಡಿ, ಆಗ ಅವರು ನಮಗೆ ತೊಂದರೆ ಕೊಡುತ್ತಾರೆ ಎಂಬ ಭಯವಿರುವುದಿಲ್ಲ.
12.ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ ಮುಂತಾದವು ಮನಸನ್ನು ತಿಳಿಗೊಳಿಸುತ್ತವೆ.
13.ಮಾಡುವ ಕೆಲಸದ ಬಗ್ಗೆ ಮುಂದಾಲೋಚನೆ ಇರಲಿ.
14.ಪ್ರತಿ ಹೆಜ್ಜೆ ಇಡುವ ಮುನ್ನ ಹತ್ತು ಬಾರಿ ಯೋಚಿಸಿ.
15.ಮಾತು ಮುತ್ತಿನಂತಿರಲಿ. ಹಿತವಾಗಿರಲಿ.

ಹೀಗೆ ನಾವು ಒಳ್ಳೆಯ ಮನಸಿನಿಂದ ಯೋಚಿಸಿದರೆ ಎಲ್ಲವೂ ಒಳ್ಳೆಯದಾಗಿ ಕಾಣಿಸುತ್ತದೆ. ನೆಮ್ಮದಿ ತಾನೆ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಒಳ್ಳೆಯ ಆರೋಗ್ಯ, ನಿದ್ದೆ ಸಂತೃಪ್ತಿ ನಮ್ಮದಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.






CBSEಯಿಂದ ಸ್ಟೇಟ್ ಬೋರ್ಡ್ ಗೆ

ಈಗೀಗ ಹೆಚ್ಚಾಗಿ ಮಕ್ಕಳು 10ನೇ ತರಗತಿಯವರೆಗೆ CBSE ಬೋರ್ಡಿನಲ್ಲಿ ಕಲಿಯುತ್ತಾರೆ. ಕೆಲವೊಂದು ವಿದ್ಯಾರ್ಥಿಗಳು ಪಿಯುಸಿಯನ್ನು ಅದೇ ಬೋರ್ಡಿನಲ್ಲಿ ಮುಂದುವರೆಸುತ್ತಾರೆ. ಹೆಚ...